ಪುಸ್ತಕದ ಹೆಸರು: ದುಡ್ಡು ದುಡ್ಡು
ಲೇಖಕರು: ಮೂಲ: ಯಂಡಮೂರಿ ವೀರೇಂದ್ರನಾಥ್
ಅನುವಾದ : ವಂಶಿ
ಈ ಪುಸ್ತಕ ಓದಿದ ತಕ್ಷಣ ನಾನು "ಅದ್ಭುತ " ಎಂದು ಉದ್ಗರಿಸಿದೆ. ಯಂಡಮೂರಿಯವರ ಪಾತ್ರ ಸೃಷ್ಟಿ, ಕಥನ ಶೈಲಿ, ಕಾದಂಬರಿಗೆ ಅವರ ವಸ್ತುವಿನ ಆಯ್ಕೆ, ಕಾದಂಬರಿಗೆ ಬೇಕಾದ ವಿಷಯಗಳ ಬಗ್ಗೆ ಸಂಶೋಧನೆ, ಆಳ, ಅರಿವು, ಓದುಗನ ಮನಸ್ಥಿತಿ ಹೇಗಿರಬಹುದು, ಹೇಗೆ ಆಗಬಹುದು, ಅವರ ಕಾದಂಬರಿ ಏನು ಸಂದೇಶ ದಾಟಿಸಬೇಕು, ಇವೆಲ್ಲದರ ಬಗ್ಗೆ ಅವರು ವಹಿಸಿರುವ ಆಸ್ಥೆ ಎಚ್ಚರಿಕೆಗಳೇ ಅವರನ್ನು ನಂಬರ್ ವನ್ ಕಾದಂಬರಿಕಾರರನ್ನಾಗಿಸಿದೆ ಅನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.
what a book ! What a book ! What a book !! ನಿಜಕ್ಕೂ ಪ್ರತಿಪುಟದಲ್ಲೂ ಕುತೂಹಲ ಕೆರಳಿಸಿದ ಪುಸ್ತಕ ಇದು. ಈ ಕಾದಂಬರಿಯ ಮುಖ್ಯ ಪಾತ್ರದ ಹೆಸರು ಗಾಂಧಿ. ಗಾಂಧಿ ಭಾರತದ ಕರೆನ್ಸಿಯ ಪ್ರತಿ ನೋಟಿನ ಮೇಲೂ ಇದ್ದಾನೆ. ಈ ಗಾಂಧಿ ಎಂಬ ಹೆಸರನ್ನ ದುಡ್ಡೇ ಇಲ್ಲದ ನಿರ್ಗತಿಕನಾದ ಕಥಾನಾಯಕನ ಹೆಸರಾಗಿ ಅವರು ಆರಿಸಿದ್ದು ಬಹಳ ಮಾರ್ಮಿಕವಾಗಿದೆ. ಈ ಗಾಂಧಿ ದುಡ್ಡು ಮಾಡುವ ಒಂದ್ಪು ಅಪೂರ್ವ ಪಂದ್ಯದ ರೋಚಕ ಕಥೆ ಈ ಕಾದಂಬರಿ.
ಒಂದೇ ಒಂದು ಸಾಮ್ಯ ಕಾಣಿಸಿತು, ಕಪ್ಪಂಚು ಬಿಳಿಸೀರೆ ಮತ್ತು ಈ ಪುಸ್ತಕದಲ್ಲಿ. ಎರಡರಲ್ಲೂ ಒಂದು ಹೆಣ್ಣು ಪಾತ್ರ ಕಾಣದಂತೆ ಕೆಲಸ ಮಾಡುತ್ತಿರುತ್ತದೆ, ಮತ್ತು ಅದು ಕಥಾನಾಯಕನಿಗಿಂತ ಹೆಚ್ಚು ಬುದ್ಧಿವಂತ ಹೆಣ್ಣಾಗಿರುತ್ತದೆ. ಮತ್ತು, ಅದೇ ಹೆಣ್ಣಿಗೆ ಈ ನಾಯಕನಿಂದ ಅಪಾರವಾದ ಅನ್ಯಾಯ ಆಗಿರುತ್ತದೆ. ಅದು ಬಿಟ್ಟರೆ ಎರಡೂ ಕಾದಂಬರಿಯ ಕಥಾ ಹಂದರ ಸಂಪೂರ್ಣ ಬೇರೆ.
ಗಾಂಧಿಯು ದುಡ್ಡು ಸಂಪಾದಿಸಲು ಮಾಡುವ ಪ್ಲಾನುಗಳಲ್ಲಿ ಒಂದನ್ನಾದರೂ ಮಾಡಿಯೇ ನೋಡಬೇಕು ಅಂತ ಒಮ್ಮೆ ಆಸೆಯಾಯಿತಾದರೂ, ಇದು ಕಾದಂಬರಿಯಲ್ಲ, ಜೀವನ ಅಂತ ನೆನಪಾಗಿ ಸುಮ್ಮನಾಗಬೇಕಾಯಿತು. ಮಿಕ್ಕೆಲ್ಲದನ್ನು ಹೇಳಿ ಕಾದಂಬರಿಯ ಓದಿನ ಸುಖವನ್ನು ಹಾಳು ಮಾಡಲಾರೆ. ಖಂಡಿತಾ ಓದಬೇಕಾದ ಪುಸ್ತಕ, ಮತ್ತೂ ಮತ್ತೂ ಓದಿಸಿಕೊಳ್ಳುವ ಪುಸ್ತಕ.
ಲೇಖಕರು: ಮೂಲ: ಯಂಡಮೂರಿ ವೀರೇಂದ್ರನಾಥ್
ಅನುವಾದ : ವಂಶಿ
ಈ ಪುಸ್ತಕ ಓದಿದ ತಕ್ಷಣ ನಾನು "ಅದ್ಭುತ " ಎಂದು ಉದ್ಗರಿಸಿದೆ. ಯಂಡಮೂರಿಯವರ ಪಾತ್ರ ಸೃಷ್ಟಿ, ಕಥನ ಶೈಲಿ, ಕಾದಂಬರಿಗೆ ಅವರ ವಸ್ತುವಿನ ಆಯ್ಕೆ, ಕಾದಂಬರಿಗೆ ಬೇಕಾದ ವಿಷಯಗಳ ಬಗ್ಗೆ ಸಂಶೋಧನೆ, ಆಳ, ಅರಿವು, ಓದುಗನ ಮನಸ್ಥಿತಿ ಹೇಗಿರಬಹುದು, ಹೇಗೆ ಆಗಬಹುದು, ಅವರ ಕಾದಂಬರಿ ಏನು ಸಂದೇಶ ದಾಟಿಸಬೇಕು, ಇವೆಲ್ಲದರ ಬಗ್ಗೆ ಅವರು ವಹಿಸಿರುವ ಆಸ್ಥೆ ಎಚ್ಚರಿಕೆಗಳೇ ಅವರನ್ನು ನಂಬರ್ ವನ್ ಕಾದಂಬರಿಕಾರರನ್ನಾಗಿಸಿದೆ ಅನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.
what a book ! What a book ! What a book !! ನಿಜಕ್ಕೂ ಪ್ರತಿಪುಟದಲ್ಲೂ ಕುತೂಹಲ ಕೆರಳಿಸಿದ ಪುಸ್ತಕ ಇದು. ಈ ಕಾದಂಬರಿಯ ಮುಖ್ಯ ಪಾತ್ರದ ಹೆಸರು ಗಾಂಧಿ. ಗಾಂಧಿ ಭಾರತದ ಕರೆನ್ಸಿಯ ಪ್ರತಿ ನೋಟಿನ ಮೇಲೂ ಇದ್ದಾನೆ. ಈ ಗಾಂಧಿ ಎಂಬ ಹೆಸರನ್ನ ದುಡ್ಡೇ ಇಲ್ಲದ ನಿರ್ಗತಿಕನಾದ ಕಥಾನಾಯಕನ ಹೆಸರಾಗಿ ಅವರು ಆರಿಸಿದ್ದು ಬಹಳ ಮಾರ್ಮಿಕವಾಗಿದೆ. ಈ ಗಾಂಧಿ ದುಡ್ಡು ಮಾಡುವ ಒಂದ್ಪು ಅಪೂರ್ವ ಪಂದ್ಯದ ರೋಚಕ ಕಥೆ ಈ ಕಾದಂಬರಿ.
ಒಂದೇ ಒಂದು ಸಾಮ್ಯ ಕಾಣಿಸಿತು, ಕಪ್ಪಂಚು ಬಿಳಿಸೀರೆ ಮತ್ತು ಈ ಪುಸ್ತಕದಲ್ಲಿ. ಎರಡರಲ್ಲೂ ಒಂದು ಹೆಣ್ಣು ಪಾತ್ರ ಕಾಣದಂತೆ ಕೆಲಸ ಮಾಡುತ್ತಿರುತ್ತದೆ, ಮತ್ತು ಅದು ಕಥಾನಾಯಕನಿಗಿಂತ ಹೆಚ್ಚು ಬುದ್ಧಿವಂತ ಹೆಣ್ಣಾಗಿರುತ್ತದೆ. ಮತ್ತು, ಅದೇ ಹೆಣ್ಣಿಗೆ ಈ ನಾಯಕನಿಂದ ಅಪಾರವಾದ ಅನ್ಯಾಯ ಆಗಿರುತ್ತದೆ. ಅದು ಬಿಟ್ಟರೆ ಎರಡೂ ಕಾದಂಬರಿಯ ಕಥಾ ಹಂದರ ಸಂಪೂರ್ಣ ಬೇರೆ.
ಗಾಂಧಿಯು ದುಡ್ಡು ಸಂಪಾದಿಸಲು ಮಾಡುವ ಪ್ಲಾನುಗಳಲ್ಲಿ ಒಂದನ್ನಾದರೂ ಮಾಡಿಯೇ ನೋಡಬೇಕು ಅಂತ ಒಮ್ಮೆ ಆಸೆಯಾಯಿತಾದರೂ, ಇದು ಕಾದಂಬರಿಯಲ್ಲ, ಜೀವನ ಅಂತ ನೆನಪಾಗಿ ಸುಮ್ಮನಾಗಬೇಕಾಯಿತು. ಮಿಕ್ಕೆಲ್ಲದನ್ನು ಹೇಳಿ ಕಾದಂಬರಿಯ ಓದಿನ ಸುಖವನ್ನು ಹಾಳು ಮಾಡಲಾರೆ. ಖಂಡಿತಾ ಓದಬೇಕಾದ ಪುಸ್ತಕ, ಮತ್ತೂ ಮತ್ತೂ ಓದಿಸಿಕೊಳ್ಳುವ ಪುಸ್ತಕ.